``ಪದಯಾನ``ದ ಉಲ್ಲೇಖಾರ್ಹ ಪುರಸ್ಕಾರ
ಲೇಖಕರು : ಎಲ್. ಎನ್. ಭಟ್ ಮಳಿಯ
ಶುಕ್ರವಾರ, ಜೂನ್ 10 , 2016
|
ಜೂನ್ 10 , 2016
|
``ಪದಯಾನ``ದ ಉಲ್ಲೇಖಾರ್ಹ ಪುರಸ್ಕಾರ
ಮಂಗಳೂರು :
ಸಮರ್ಥ ಭಾಗವತ ಪದ್ಯಾಣ ಗಣಪತಿ ಭಟ್ಟರ ಹಿಂದೆ ಹಲವರ ಪ್ರೋತ್ಸಾಹವನ್ನು ಕಂಡ "ಪದಯಾನ' ಅಭಿನಂದನಾ ಸಮಿತಿ ಮಾದರಿಯಾದ ಪುರಸ್ಕಾರವನ್ನು ಮಾಡಿದೆ. ಮಂಗಳೂರು ಪುರಭವನದಲ್ಲಿ ಜೂನ್ 5ರಂದು ಜರಗಿದ ಪದ್ಯಾಣ ಪದಯಾನದ ಗೌರವಗಳು ಮಹತ್ವಪೂರ್ಣ. ಅಗರಿ ರಘುರಾಮ ಭಾಗವತರಿಗೆ ಪದ್ಯಾಣ ಪ್ರಶಸ್ತಿ (ಪುಟ್ಟುನಾರಾಯಣ ಭಟ್ಟ ಪ್ರಶಸ್ತಿ) ನೀಡಲಾಯಿತು.
ಮಾಂಬಾಡಿ ಭಾಗವತರ ನೆನಪಿಗಾಗಿ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಡಾ| ಶೇಣಿ ಗೋಪಾಲಕೃಷ್ಣ ಭಟ್ಟರ ನೆನಪಿನಲ್ಲಿ ಯುವ ಅರ್ಥಧಾರಿ ಶೇಣಿ ವೇಣುಗೋಪಾಲ ಭಟ್, ದಾಸರಬೈಲು ಚನಿಯ ನಾಯ್ಕರ ನೆನಪಿನಲ್ಲಿ ಅವರ ಪುತ್ರ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ನೆನಪಿನಲ್ಲಿ ಅವರ ಪುತ್ರ, ಕಡಬ ನಾರಾಯಣ ಆಚಾರ್ಯರ ನೆನಪಿನಲ್ಲಿ ಅವರ ಪತ್ನಿ ಹಾಗೂ ಅವರ ಪುತ್ರ ಯುವ ಮದೆÉಗಾರ ವಿನಯ ಆಚಾರ್ಯ ಇವರನ್ನೆಲ್ಲ ಗುರುತಿಸಿದ್ದು ಅರ್ಥಪೂರ್ಣ. ಸಮುತ್ತರಣದಲ್ಲಿ ಟಿ. ಶ್ಯಾಮ ಭಟ್, ಕೆ. ವರದರಾಯ ಪೈ, ಕುಂಬ್ಳೆ ಸುಂದರ್ ರಾವ್, ಕಿಶನ್ ಕುಮಾರ್ ಹೆಗ್ಡೆ,, ಪುತ್ತೂರು ಶ್ರೀಧರ ಭಂಡಾರಿ ಇವರನ್ನು ಪದ್ಯಾಣರು ಗೌರವಿಸಿದ್ದು ಗಮನೀಯ.
ಸಂಕ್ರಮಣದಲ್ಲಿ ಪದ್ಯಾಣ ಗಣಪತಿ ಭಟ್ಟರು ತಮ್ಮ ಹಿರಿಯ-ಕಿರಿಯ ಕಲಾವಿದರನ್ನು ಗೌರವಿಸಿದರು. ತನಗೆ ಪ್ರೋತ್ಸಾಹವನ್ನಿತ್ತ ಪ್ರತಿಯೊಬ್ಬ ಸಹ ಕಲಾವಿದ, ಯಜಮಾನ, ಪ್ರೇಕ್ಷಕರನ್ನು ಸಮ್ಮಾನಿಸಲು ಯಾವುದೇ ಕಲಾವಿದನಿಗೆ ಅಸಾಧ್ಯ. ಹಾಗಿದ್ದರೂ ನೆರವಾದ ಕಲಾಸೇವಕರನ್ನು ಮರೆಯದ ಪದ್ಯಾಣ ಭಾಗವತರು ಯುವ ಕಲಾವಿದರಿಗೆ ಮಾದರಿ.
ಕೃಪೆ :
udayavani
|
|
|