ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
``ಪದಯಾನ``ದ ಉಲ್ಲೇಖಾರ್ಹ ಪುರಸ್ಕಾರ

ಲೇಖಕರು : ಎಲ್‌. ಎನ್‌. ಭಟ್‌ ಮಳಿಯ
ಶುಕ್ರವಾರ, ಜೂನ್ 10 , 2016
ಜೂನ್ 10 , 2016

``ಪದಯಾನ``ದ ಉಲ್ಲೇಖಾರ್ಹ ಪುರಸ್ಕಾರ

ಮಂಗಳೂರು : ಸಮರ್ಥ ಭಾಗವತ ಪದ್ಯಾಣ ಗಣಪತಿ ಭಟ್ಟರ ಹಿಂದೆ ಹಲವರ ಪ್ರೋತ್ಸಾಹವನ್ನು ಕಂಡ "ಪದಯಾನ' ಅಭಿನಂದನಾ ಸಮಿತಿ ಮಾದರಿಯಾದ ಪುರಸ್ಕಾರವನ್ನು ಮಾಡಿದೆ. ಮಂಗಳೂರು ಪುರಭವನದಲ್ಲಿ ಜೂನ್‌ 5ರಂದು ಜರಗಿದ ಪದ್ಯಾಣ ಪದಯಾನದ ಗೌರವಗಳು ಮಹತ್ವಪೂರ್ಣ. ಅಗರಿ ರಘುರಾಮ ಭಾಗವತರಿಗೆ ಪದ್ಯಾಣ ಪ್ರಶಸ್ತಿ (ಪುಟ್ಟುನಾರಾಯಣ ಭಟ್ಟ ಪ್ರಶಸ್ತಿ) ನೀಡಲಾಯಿತು.

ಮಾಂಬಾಡಿ ಭಾಗವತರ ನೆನಪಿಗಾಗಿ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್‌, ಡಾ| ಶೇಣಿ ಗೋಪಾಲಕೃಷ್ಣ ಭಟ್ಟರ ನೆನಪಿನಲ್ಲಿ ಯುವ ಅರ್ಥಧಾರಿ ಶೇಣಿ ವೇಣುಗೋಪಾಲ ಭಟ್‌, ದಾಸರಬೈಲು ಚನಿಯ ನಾಯ್ಕರ ನೆನಪಿನಲ್ಲಿ ಅವರ ಪುತ್ರ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ನೆನಪಿನಲ್ಲಿ ಅವರ ಪುತ್ರ, ಕಡಬ ನಾರಾಯಣ ಆಚಾರ್ಯರ ನೆನಪಿನಲ್ಲಿ ಅವರ ಪತ್ನಿ ಹಾಗೂ ಅವರ ಪುತ್ರ ಯುವ ಮದೆÉಗಾರ ವಿನಯ ಆಚಾರ್ಯ ಇವರನ್ನೆಲ್ಲ ಗುರುತಿಸಿದ್ದು ಅರ್ಥಪೂರ್ಣ. ಸಮುತ್ತರಣದಲ್ಲಿ ಟಿ. ಶ್ಯಾಮ ಭಟ್‌, ಕೆ. ವರದರಾಯ ಪೈ, ಕುಂಬ್ಳೆ ಸುಂದರ್‌ ರಾವ್‌, ಕಿಶನ್‌ ಕುಮಾರ್‌ ಹೆಗ್ಡೆ,, ಪುತ್ತೂರು ಶ್ರೀಧರ ಭಂಡಾರಿ ಇವರನ್ನು ಪದ್ಯಾಣರು ಗೌರವಿಸಿದ್ದು ಗಮನೀಯ.

ಸಂಕ್ರಮಣದಲ್ಲಿ ಪದ್ಯಾಣ ಗಣಪತಿ ಭಟ್ಟರು ತಮ್ಮ ಹಿರಿಯ-ಕಿರಿಯ ಕಲಾವಿದರನ್ನು ಗೌರವಿಸಿದರು. ತನಗೆ ಪ್ರೋತ್ಸಾಹವನ್ನಿತ್ತ ಪ್ರತಿಯೊಬ್ಬ ಸಹ ಕಲಾವಿದ, ಯಜಮಾನ, ಪ್ರೇಕ್ಷಕರನ್ನು ಸಮ್ಮಾನಿಸಲು ಯಾವುದೇ ಕಲಾವಿದನಿಗೆ ಅಸಾಧ್ಯ. ಹಾಗಿದ್ದರೂ ನೆರವಾದ ಕಲಾಸೇವಕರನ್ನು ಮರೆಯದ ಪದ್ಯಾಣ ಭಾಗವತರು ಯುವ ಕಲಾವಿದರಿಗೆ ಮಾದರಿ.

ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ